ವಜೇಶ್ವರಿ ಮುಕ್ತಾನಂದರು ವಿದೇಶಿ ಭಕ್ತರನ್ನಾಕರ್ಷಿಸಿದ ಕಥೆ
🕉️ ವಜ್ರೇಶ್ವರಿಯ ಮುಕ್ತಾನಂದರು 🙏
೧೧ ನೇ ವರ್ಷದ ಮುಕ್ತಾನಂದರು ಬಾಲ್ಯದಿಂದಲೂ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಸೇವೆಗೆ ತೊಡಗಿದರು. ೧೮ ವರ್ಷದಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದರು. ಐರಣಿಯಲ್ಲಿ ಮುಪ್ಪಿನಾರ್ಯರ ಮಠದಲ್ಲಿ ೪, ೫ ವರ್ಷ ವಾಸ ಮಾಡಿ ಆಧ್ಯಾತ್ಮ ಚಿಂತನದಲ್ಲಿ ಕಾಲ ಕಳೆದು ಮುಂದೆ ಸಂಚಾರ ಮಾಡುತ್ತಾ ಮಾಡುತ್ತಾ ಮಹಾರಾಷ್ಟ್ರದಲ್ಲಿ ಗಣೇಶಪುರಿಯಲ್ಲಿಯ ವಜ್ರೇಶ್ವರಿಯ ನಿತ್ಯಾನಂದರ ಆಶ್ರಮಕ್ಕೆ ಆಗಮಿಸಿದರು. ಇಲ್ಲಿ ಶ್ರೀ ಸಿದ್ಧಾರೂಢರ ತತ್ವ ಪ್ರಚಾರದಲ್ಲಿ ತೊಡಗಿದರು. ಈ ಆಶ್ರಮದಲ್ಲಿ ಪ್ರತಿನಿತ್ಯ ಪ್ರಾತಃಕಾಲ ಪಂಚಾಕ್ಷರಿ ಮಂತ್ರದ ಭಜನೆಯು ನಡೆಯುತ್ತಿದ್ದು ಶಾಸ್ತ್ರ ಶ್ರವಣದಲ್ಲಿ ಭಕ್ತರೆಲ್ಲರೂ ಏಕಚಿತ್ತದಿಂದ ಇರುವದು ದರ್ಶನಾರ್ಥಿಗಳಿಗೆ ಹೃನ್ಮನಗಳ ನ್ನಾಕರ್ಷಿಸಿದೆ. ಸುಮಾರು ೨೦೦, ೩೦೦ ವಿದೇಶಿ ಭಕ್ತರು ಇಲ್ಲಿ ವಾಸ ಮಾಡುತ್ತಾ ಅವರು ಮಾಡುವ ಭಜನೆ, ಉಪಾಸನೆ, ಧ್ಯಾನ, ಇತ್ಯಾದಿಗಳು ಅವರ್ಣನೀಯವಾಗಿವೆ. ಇದೆಲ್ಲ ಮುಕ್ತಾನಂದರ ಪರಿಶ್ರಮವಾಗಿದೆ.
🕉️ ಬೆಂಗಳೂರಿನಲ್ಲಿ ಸಿದ್ದಾಶ್ರಮ 🌷
ಶ್ರೀ ಸಿದ್ಧಾರೂಢ ಸ್ವಾಮಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಗೋವಿಂದ ಸ್ವಾಮಿಗೆ ಸಂಚಾರಕ್ಕೆ ಹೋಗಲು ಆಜ್ಜೆಯಾಗಿದ್ದಕ್ಕೆ ಸಂಚಾರ ಮಾಡುತ್ತಾ ಬೆಂಗಳೂರಿಗೆ ಬಂದರು. ಇಲ್ಲಿ ಸಿದ್ದಾಶ್ರಮವನ್ನು ಸ್ಥಾಪಿಸಿ, ಶ್ರೀ ಸಿದ್ಧಾರೂಢರ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಹುಬ್ಬಳ್ಳಿಯಂತೆ ಇಲ್ಲಿ ನಿತ್ಯ ಪೂಜಾ, ಭಜನಾ ನಡೆಯಲಾರಂಭಿಸಿತು. ರಾಮನವಮಿಗೆ ಹುಬ್ಬಳ್ಳಿಗೆ ಬಂದು, ಉತ್ಸವ ಆಚರಣೆ ಈಗಲೂ ಈ ಆಶ್ರಮದವರು ನಡೆಸಿಕೊಂಡು ಹೋಗುತ್ತಿದ್ದಾರೆ.
👇👇👇👇👇👇👇👇👇👇👇👇👇👇
👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
