ಕನಸಲ್ಲಿ ಸಿದ್ಧಾರೂಢರು ಹೇಳಿದ ವಿಷಯ ಸತ್ಯವಾಗಿ ಮಠದಲ್ಲಿ ಭಾಗವತ ಪುರಾಣ ಪ್ರಾರಂಭ

 🙏 ಮಠದಲ್ಲಿ ಭಾಗವತ ಪುರಾಣ ಪ್ರಾರಂಭ 🙏



ಶಂಕರಶಾಸ್ತ್ರಿ ಮಿಶ್ರಿಕೋಟಿಯೆಂಬ ಮಹನೀಯರು ಭಾಗವತ ಗ್ರಂಥದ ಪ್ರವಚನ ಮಾಡುತ್ತ ಊರೂರು ತಿರುಗುತ್ತಿದ್ದರು. ಭಾಗವತದ ಹೆಚ್ಚಿನ ಭಾವ ತಿಳಿದುಕೊಳ್ಳಬೇಕಾದರೆ ಶ್ರೀ ಗುರುವಿಲ್ಲದೆ ಸರಿಯಾದ ಗತಿ ಸಿಗುವುದಿಲ್ಲವೆಂಬ ವಿವೇಕದಿಂದ ತಳಮಳಗೊಳ್ಳುತ್ತಿದ್ದರು. ಸೂಳಿಬಾವಿ ಗ್ರಾಮದ ಸದಾಶಿವಪ್ಪ ಕುಲಕರ್ಣಿಯವರ ಮಗ ಸಾಂಬಪ್ಪನವರು ಶ್ರೀ ಸಿದ್ಧಾರೂಢರ ಭಕ್ತಿಯನ್ನು ಅನೇಕ ವರ್ಷಗಳಿಂದ ಮಾಡುತ್ತ ಬಂದಿದ್ದರು. ಶಂಕರ ಶಾಸ್ತ್ರಿಗಳು ಅವರ ಮನೆಯಲ್ಲಿ ಭಾಗವತ ಸಪ್ತಾಹ ಪ್ರಾರಂಭಿಸಿದ್ದರು. ಅವರ ಪ್ರವಚನ ಕೇಳಲು ಬಹಳ ಸಂಖ್ಯೆಯಲ್ಲಿ ಜನರು ಬರುತ್ತಿದ್ದರು. ಅವರ ಹರಿಕಥೆಯು ಬಹಳ ಮಧುರವಾಗಿರುವುದರಿಂದ ಭಕ್ತರು ಭ್ರಮರಗಳಂತೆ ಆ ಮಧುರ ವಚನಗಳನ್ನು ಸವಿಯಲು ಬರುತ್ತಿದ್ದರು. ಸಪ್ತಾಹ  ಪ್ರಾರಂಭವಾದ ಮೂರು ದಿವಸಗಳಲ್ಲಿ ಶ್ರೀ ಸಿದ್ಧಾರೂಢರಿಂದ ಮೂರು ಪತ್ರಗಳು ಬಂದವು. ಅವುಗಳಲ್ಲಿ ಶಾಸ್ತ್ರಿಗಳೇ ನಿಮ್ಮ ಸೇವೆಯ ಕಾರ್ಯ ಇಲ್ಲಿದೆ. ಅದನ್ನು ಬಿಟ್ಟು ನಮ್ಮ ಹುಬ್ಬಳ್ಳಿಯ ಸಿದ್ಧಾಶ್ರಮಕ್ಕೆ  ಬರಬೇಕು' ಎಂದು ಬರೆಯಲಾಗಿತ್ತು.


ಸಾಂಬಪ್ಪನವರು ಪತ್ರದ ಸಾರವನ್ನು ತಿಳಿದು ಇಲ್ಲಿ ಸಪ್ತಾಹ ಪ್ರಾರಂಭಿಸಲಾಗಿದೆ. ಇದನ್ನು ಅರ್ಧದಲ್ಲಿ ಬಿಟ್ಟು ಹೇಗೆ ಹೋಗಬೇಕು ಎಂದು ಶ್ರೀ ಸಿದ್ಧಾರೂಢರಿಗೆ ಹೀಗೆ ಪತ್ರ ಬರೆದರು 'ಸದ್ಗುರುವೇ, ನಮ್ಮ ಮನೆಯಲ್ಲಿ ಶ್ರೀ ಶಂಕರ ಶಾಸ್ತ್ರಿಗಳು ಭಕ್ತಿಯಿಂದ ಪುರಾಣ ಹೇಳುತ್ತಿದ್ದಾರೆ. ಇನ್ನು ಮೂರು ದಿವಸಗಳ ನಂತರ ಮುಗಿಯುತ್ತದೆ. ಮುಗಿದ ತಕ್ಷಣ ಶಾಸ್ತ್ರಿಗಳನ್ನು ಕರೆದುಕೊಂಡು ಬರುತ್ತೇನೆ' ಎಂದು ಪತ್ರ ಬರೆದರು. ಸಪ್ತಾಹದ ಆರನೆಯ ದಿನ ಶಾಸ್ತ್ರಿಗಳು ಆ ದಿನದ ಭಾಗವತ ಮುಗಿಸಿ ರಾತ್ರಿ ಊಟ ಮಾಡಿ ಮಲಗಿದಾಗ ಸ್ವಪ್ನ ಬಿದ್ದಿತು. ಅದರಲ್ಲಿ ಸಿದ್ಧಾರೂಢರು ಭವ್ಯವಾದ ಸಿಂಹಾಸನದಲ್ಲಿ ಕುಳಿತಿದ್ದಾರೆ. ಮಸ್ತಕದಲ್ಲಿ ಕಿರೀಟ, ಹಣೆಯಲ್ಲಿ ಭಸ್ಮ, ಕುಂಕುಮ, ಕೊರಳಲ್ಲಿ ನಾಗಾಭರಣ ಶೋಭಿಸುತ್ತಿದೆ. ಮಾಲೆ ಧರಿಸಿ ಭರಜರಿ ಶಾಲು ಹೊತ್ತಿದ್ದಾರೆ. ಆಗ ಶಾಸ್ತ್ರಿಗಳು ಎದ್ದು ನಿಂತು ನಮಸ್ಕರಿಸಿದಾಗ ಶ್ರೀಗಳು ಹೇಳುತ್ತ `ಜಗತ್ತಿನಲ್ಲಿ ಶ್ರೀ ಗುರುವೇ ಪಸರಿಸಿದ್ದಾನೆಂಬುದನ್ನು ಮರೆತಿರುವೆಯಾ? ಏನು? ಹುಬ್ಬಳ್ಳಿಗೆ ಬಂದು ಗುರುದರ್ಶನ ಪಡೆದು ನಿನ್ನ ಜನ್ಮ ಸಫಲ ಮಾಡಿಕೊಳ್ಳು ಪ್ರಪಂಚದಲ್ಲಿ ಇದೇ ನಿನ್ನ ಕರ್ತವ್ಯವಾಗಿದೆ' ಎಂದು ಹೇಳಿ ಅದೃಶ್ಯರಾದರು.


ಶಂಕರಶಾಸ್ತ್ರಿಗಳು ಮುಂಜಾನೆ ಎದ್ದು ಸಾಂಬಪ್ಪನವರಿಗೆ ಕನಸಿನ ವಿಚಾರ ತಿಳಿಸಿದರು. ಆಗ ಸಾಂಬಪ್ಪನವರು ತಮಗೆ ಸಿದ್ಧಾರೂಢರಿಂದ ಬಂದ ಇನ್ನೊಂದು ಪತ್ರ ಓದಿ ಹೇಳಿದರು. ಅದರಲ್ಲಿ 'ಸಾಂಬಪ್ಪ, ಸಪ್ತಾಹಪೂರ್ಣಗೊಂಡ ನಂತರ ಶಾಸ್ತ್ರಿಗಳನ್ನು ಕರೆದುಕೊಂಡು ಬರಬೇಕು' ಎಂದು ಬರೆದ ಪತ್ರದ ಸಾರಾಂಶ ತಿಳಿದು ಸಂತೋಷಗೊಂಡರು. ಸಪ್ತಾಹ ಪೂರ್ಣವಾದ ಬಳಿಕ ಸಾಂಬಪ್ಪನವರು ಶಂಕರ ಶಾಸ್ತ್ರಿಗಳ ಜೊತೆಗೆ ಹುಬ್ಬಳ್ಳಿಗೆ ಬಂದು ಸದ್ಗುರುಗಳ ದರ್ಶನ ಪಡೆದುಕೊಂಡರು. ಆಗ ಗುರುಗಳು ಮುಗುಳು ನಗೆ ಬೀರಿ ಹೇಳಿದರು 'ಶಂಕರಶಾಸ್ತ್ರಿಗಳೆ, ಮಿಶ್ರಿಕೋಟೆಯ ಶ್ರೀಪಾದ ಶಾಸ್ತ್ರಿಗಳ ಮಕ್ಕಳು ನೀವು ನಿಮ್ಮ ತಂದೆ ಕೃಷ್ಣಂದ್ರಸ್ವಾಮಿಗಳ ಮಠದಲ್ಲಿ ಪ್ರತಿವರ್ಷ ಭಾಗವತ ಸಪ್ತಾಹದಲ್ಲಿ ಪ್ರವಚನ ಮಾಡುತ್ತಿದ್ದರು. ನಾನೂ ಆಗ ಕೇಳಿದ್ದೇನೆ. ಈಗ ನಿಮ್ಮಿಂದ ಕೇಳುವ ಇಚ್ಛೆಯಾಗಿದೆ. ನೀವು ಅವರ ಮಕ್ಕಳಾದುದರಿಂದ ಆ ಕರ್ತವ್ಯ ಮಾಡಬೇಕು. ಜನ್ಮ ಸಾರ್ಥಕಕ್ಕೆ ಉತ್ತಮ ಸಾಧನವಾದ ಭಾಗವತವನ್ನು ಪ್ರತಿವರ್ಷ ಈ ಮಠದಲ್ಲಿ ಹೇಳಿ ಸಪ್ತಾಹ ಮಾಡಬೇಕು. ಇದುವೇ ನನ್ನ ಉಪದೇಶವಾಗಿದೆ. ನಿಮ್ಮ ಜನ್ಮ ದುಃಖದ ನಿವಾರಣೆಯನ್ನು ಶ್ರೀ ಗುರುವು ಮಾಡುತ್ತಾನೆ' ಎಂದು ಹೇಳಿದರು. ಆಗ ಶಾಸ್ತ್ರಿಗಳು ಗುರುಗಳ ವಚನ ಮತ್ತು ಕನಸಿನ ಅನುಭವ ಸ್ಮರಣೆ ಮಾಡಿದಾಗ ಸಿದ್ದರ ಚರಣಗಳಲ್ಲಿ ಭಕ್ತಿ ಹೆಚ್ಚಾಯಿತು.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ



                     👇 ಮುಂದಿನ ಕಥೆ  👇

👇ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹ ಕ್ಕೆ 👇

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
👉👉ಸಂಪೂರ್ಣ ಕಥೆಯನ್ನು WhatsApp share ಮಾಡಲು 📲


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ