ಬಾಲಕ ಗುರುನಾಥ ಸತ್ತ ಗೋವನ್ನು ಬದುಕಿಸಿದ

 



ಬಲು ತುಂಟನಾದ ಬಾಲಕ ಗುರುನಾಥ, ತನ್ನಮನೆಯಲ್ಲಿ ತನ್ನ ಗೆಳೆಯರೊಂದಿಗೆ ತನಗೆ ಪಗಡೆಯಾಟ ಗೊತ್ತಿಲ್ಲದಿದ್ದರೂ ಮಕ್ಕಳಾಡುವಂತೆ ಪಗಡೆಯಾಟವನ್ನು ಆಡುತ್ತಿದ್ದರು. ಆಗ ಮನೆಯ ಆಕಳು ಆ ಪಗಡೆಯಾಟದಲ್ಲಿ ಹಾಯ್ದು ಮನೆಯ ಹೊರಗಡೆ ಹೋಯಿತು. ಆಗ ಆಟದ ಪಗಡೆಗಳೆಲ್ಲ ಚಲ್ಲಾಪಿಲ್ಲಿಯಾಗಿ ಅಸ್ತವ್ಯಸ್ತಗೊಂಡಿತು. ಆಗ ಶ್ರೀ ಗುರುನಾಥನು ಆ ಆಕಳ ಮೇಲೆ ಸಿಟ್ಟಾಗಿ ಅದರ ಹತ್ತಿರ ಹೋಗಿ ಆಟ ಆಡಿಸಿದೆಯಾ ಅಂತಾ ಅದನ್ನು ಕೋಲಿನಿಂದ ಜೋರಾಗಿ ಹೊಡೆದನು. ಅಷ್ಟೇ ಪೆಟ್ಟಿನಿಂದ ಆ ಆಕಳು ಒದ್ದಾಡಿ ಸತ್ತು ಬಿದ್ದಿತು. ಈ ಘಟನೆಯನ್ನು ಅಜ್ಜಿ ಲಕ್ಷ್ಮಮ್ಮನವರು ಶ್ರೀ ಸಿದ್ಧಾರೂಢರೆಡೆಗೆ ಹೋಗಿ ತಿಳಿಸಲಾಗಿ, ಶ್ರೀ ಸಿದ್ಧಾರೂಢರು ಲಕ್ಷ್ಮಮ್ಮ, ಗುರಪ್ಪ ಆಕಳನ್ನು ಕೊಂದಿಲ್ಲ. ಸುಮ್ಮನೇ ಆಟವಾಡಿದ್ದಾನೆ ಬಿಡು, ಮನೆಗೆ ಹೋಗಿ ನೋಡು ಎಂದು ಸಮಾಧಾನಪಡಿಸಿ ಮನೆಗೆ ಕಳಿಸಿದರು. ಆಗ ಲಕ್ಷ್ಮಮ್ಮ ಮನೆಗೆ ಹೋಗಿ ನೋಡುತ್ತಿರಲಾಗಿ ಗುರಪ್ಪನು ಆ ಸತ್ತುಬಿದ್ದ ಆಕಳನ್ನು ಕುರಿತು ಯಾಕೆ ಹೀಗೆ ಸತ್ತ ಪ್ರಾಣಿಯಂತೆ ಮಲಗಿರುವೆ ಏಳು ಎಂದು ಅದೇ ಕೋಲಿನಿಂದ ಹೊಡೆದನು. ಆಗ ಅದು ಎದ್ದು ಯಥಾ ಪ್ರಕಾರ ಮೈಝಾಡಿಸಿ ಮೇಯಲು ಹೊರಗೆ ಹೋಯಿತು. ಇದನ್ನು ಕಂಡು ಲಕ್ಷ್ಮಮ್ಮ ಮತ್ತು ಕೆಲವರು ಗುರುನಾಥನ ಲೀಲೆಯಿಂದ ಬೆರಗಾಗಿ, ಈ ಗುರುನಾಥಾ ಮುಂದೆ ಮಹಾನ್ ಪುರುಷನಾಗುತ್ತಾನೆ ಎಂದು ಕೊಂಡಾಡಿದರು.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಭಕ್ತನ ಬಂಧನ ಬಿಡಿಸಿದ ಶ್ರೀ ಗುರುನಾಥ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ