ಪೂರ್ಣ ವೈರಾಗ್ಯಮೂರ್ತಿ ಗುರುನಾಥಾರೂಢರು
ಒಂದು ದಿನ ಶ್ರೀಸಿದ್ದಾರೂಢ ಮಠದ ಅಡುಗೆ ಮನೆಯ ದಕ್ಷಿಣ ದಿಕ್ಕಿನ ಮೇಲ್ಬಾಗದಲ್ಲಿ ಅಡುಗೆಯ ಒಲೆಗಳಿದ್ದವು. ಅದರ ಮುಂದೆ ತೆರೆದ ಬಚ್ಚಲು ಇತ್ತು. ಅದರಲ್ಲಿ ಐದಾರು ಜನ ಫಾರಸಿ ಜನಾಂಗದ ಮಾತೆಯರು , ತಮ್ಮ ಮಕ್ಕಳನ್ನು ತಾಯಂದಿರು ಸ್ನಾನ ಮಾಡಿಸುವಂತೆ ಶ್ರೀಗುರುನಾಥರನ್ನು ಬತ್ತಲೆ ನಿಲ್ಲಿಸಿ, ಅವರಿಗೆ ಬಿಸಿ ಬಿಸಿ ನೀರು ಹಾಕಿ, ಮೈಗೆ ಮೈಸೂರು ಸ್ಯಾಂಡಲ್ ಸೋಪನ್ನು ಹಚ್ಚಿ ಅಂಗಾಂಗಗಳನ್ನು ತಿಕ್ಕಿ ಸ್ನಾನ ಮಾಡಿಸುತ್ತಿದ್ದರು. ಆಗ ಗುರುನಾಥರು ತಮ್ಮ ಎಡಗೈ ಬೆರಳನ್ನು ತುಟಿಗೆ ಹಚ್ಚಿಕೊಂಡು ಏಕಾಗ್ರ ಚಿತ್ತದಿಂದ ಕಣ್ಣು ತೆರೆದರೂ ಒಳಗಿನ ದೃಷ್ಟಿಮಾತ್ರ ಬ್ರಹ್ಮದಲ್ಲಿ ಅಡಗಿತ್ತು. ಹೆಣ್ಣುಮಕ್ಕಳು ತಮಗೆ ಬೆತ್ತಲೆ ಸ್ನಾನ ಮಾಡಿಸುತ್ತಿದ್ದಾರೆಂಬ ಅರಿವಿರಲಿ ದೇಹಪ್ರಜ್ಞೆಯಿರಲಿಲ್ಲ.
ಸ್ನಾನ ಮುಗಿದನಂತರ ಅವರ ಮೈಯನ್ನು ಸ್ವಚ್ಛ ಅರಿವೆಯಿಂದ ಒರೆಸಿ,ಕೈಪಾ ಹಾಕಿ ಪೀತಾಂಬರವನ್ನು ಹೊದಿಸಿ ಅವರ ಖೋಲಿಗೆ ಕರೆದುಕೊಂಡು ಹೋಗಿ ಪಾದ ಪೂಜಿಸಿ , ಪಾದೋದಕವನ್ನು ಪ್ರಸಾದವೆಂದು ಸ್ವೀಕರಿಸಿ, ಅವರಿಗೆ ಆರತಿ ಎತ್ತಿ ಜಯಜಯಕಾರ ಮಾಡಿದರು. ಅಲ್ಲಿದ್ದವರು ಕಂಡು ಆಶ್ಚರ್ಯ ಚಕಿತರಾಗಿ ನಮಸ್ಕರಿಸಿದರು. ಹೀಗಿತ್ತು ನಮ್ಮ ಗುರುನಾಥನ ವೈರಾಗ್ಯಸ್ಥಿತಿ.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಹೊಟ್ಟೆ ನೋವಿನಿಂದ ಬಳಲಿದ ಬಸವಣ್ಣೆಪ್ಪ ಮುಕ್ತನಾದ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
