ಸೋಮ ಭೀಮರಿಗೆ ಗುರುಶೋದನೆ ಬಗ್ಗೆ ಹೇಳಿದ್ದು

 ☸️ ಸೋಮ ಭೀಮರಿಗೆ ಗುರುಶೋದನೆ ಬಗ್ಗೆ ಹೇಳಿದ್ದು 


ಸಿದ್ಧನು ಹೋಗುವಾಗ ಅವನ ಮಿತ್ರರಾದ ಸೋಮ ಮತ್ತು ಭೀಮ ಎಂಬವರಿಬ್ಬರು ದಾರಿಯಲ್ಲಿ ಭೆಟ್ಟಿಯಾದರು. ಅವರು ಸಿದ್ಧನನ್ನು ಕುರಿತು- "ಸಿದ್ಧಾ ಎತ್ತಲಾಗೆ ಹೊರಟಿರುವಿ?” ಎಂದು ಕೇಳಲು, ಸಿದ್ದನು, "ಸರ್ವ ಪ್ರಪಂಚ ನಾಶವಾಗುವದು. ಹೀಗಿರುವಾಗ್ಗೆ ಇಲ್ಲಿದ್ದು ಏನು ಪ್ರಯೋಜನ?  ದೇಹವಿರುತ್ತಾ ಪ್ರಾಣಿಯು  ತನ್ನ ನಿಜಾತ್ಮ ಸಂಪಾದನೆಗೊಸ್ಕರ ಯತ್ನ ಮಾಡತಕ್ಕದ್ದು. ಆ ಸಲುವಾಗಿ ಗುರುಬೋಧವು ಬೇಕಾಗಿರುತ್ತದೆ. ಇಲ್ಲವಾದರೆ ಸರ್ವ ಯತ್ನಗಳು ವ್ಯರ್ಥ. ಆದ್ದರಿಂದ ನಾನು ಈಗ ಗುರುಶೋಧನೆಗೆ ಹೊರಟಿರುವೆನು", ಎಂದು ಉತ್ತರ ಕೊಟ್ಟನು. ಅದಕ್ಕವರು, ''ಇಷ್ಟು ಚಿಕ್ಕವಯಸ್ಸಿನಲ್ಯಾಕೆ ? ಈ ಕೆಲಸವು ವೃದ್ದಾಪ್ಯ ಕಾಲದಲ್ಲಿ ಶೋಭಿಸುವದು'' ಎಂದು ಅಂದದ್ದು ಕೇಳಿ, ಬಾಲ್ಯಾವಸ್ಥೆಯಲ್ಲಿ ಶುದ್ಧ ಮನಸ್ಸಿದ್ದಾಗ ಮನೆಯನ್ನು ತ್ಯಾಗ ಮಾಡಿ, ಸದ್ಗುರುವನ್ನು ಶೋಧಿಸಿ, ಆತನ ಪಾದಕ್ಕೆ ಬಿದ್ದು ಅಪ್ಪ, ಅಂಗ, ಸ್ಥಾನ, ಸದ್ಭಾವ ಸೇವೆ ಸರ್ವವಿಧ ಸೇವೆಗಳಿಂದ ಆತನ ಕೃಪೆಗೆ ಪಾತ್ರರಾಗಿ ಶಿವ ಜೀವರ ಐಕ್ಯತೆಯ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುವದು ಯೋಗ್ಯ, ಯೌವನದಲ್ಲಿ ವಿಷಯ ಲಾಲಸೆಯಲ್ಲಿ ಮನಸ್ಸು ಮುಳುಗಿರುವದು. ಆ ಸಮಯದಲ್ಲಿ ಮೋಕ್ಷ ಪಡೆಯಬೇಕೆಂಬ ಇಚ್ಛೆ ಬರಲಾರದು.

ಕೂಡಲೇ ಮುಪ್ಪಿನಾವಸ್ಥೆ ಬರಲು ಯೌವನದಲ್ಲಿ ರುಚಿಯುಂಡ ವಿಷಯದ ವಾಸನೆ ರಭಸದ ಮನದ ಸ್ಥಿತಿ ಅವಿಚಾರಮಯವಾಗಿರುತ್ತದೆ.

ಗಾಳಿಯಲ್ಲಿ ಇಟ್ಟಿರುವ ದೀಪವು ಉಳಿಯುವದೋ ಆರುವದೋ ನೀರಿನ ಮೇಲಿನ ಗುಳ್ಳೆಯಂತೆ ಅಸ್ಥಿರದ ಸ್ಥಿತಿಯಂತೆ ವಿಷಯ ಸುಖದಲ್ಲಿ ಮಗ್ನನಾದ ಮನಸ್ಸಿನಿಂದ ಕೂಡಿದ ಈ ಜಡ ದೇಹದ ಸ್ಥಿತಿಯಾಗುವದು. ಕಾರಣ ಈ ಯೌವನ ಮುಪ್ಪುಗಳ ಅವಸ್ಥೆಗಳ ಪರಿಣಾಮಗಳಿಗೆ ಬಲಿಯಾಗದೇ ಪರಬ್ರಹ್ಮನಲ್ಲಿ ಐಕ್ಯತೆಯನ್ನು ಪಡೆಯಲು ಗುರುಶೋಧನೆಗಾಗಿ ಹೊರಟಿರುವೆ" ಬಾಲಕನಾದ ಸಿದ್ಧಮುನಿಯು ಹೀಗಂದ ವಚನವನ್ನು ಕೇಳಿದ ಕೂಡಲೆ, ಅವರಿಬ್ಬರ ಮನಸ್ಸಿನೋಳಗೆ ವಿಚಾರ ಬಂದು, ಸಿದ್ಧನನ್ನು ಕುರಿತು, ''ಹಾಗಾದರೆ  ಅಪ್ಪಾ, ನಿನ್ನ ಸಂಗಡ ನಾವು ಬರುವೆವು.  ಸದ್ಗುರುವಿಗೆ ಶರಣು ಹೊಕ್ಕು ಆತ್ಮಜ್ಞಾನವನ್ನು ಪ್ರಾಪ್ತಿಮಾಡಿಕೊಂಡು ಮರಳಿ ಮನೆಗೆ ಬಂದು ನಮ್ಮ ನಮ್ಮ ಕಾರ್ಯಗಳಲ್ಲಿ ತೊಡುಗುವೆವು”, ಎಂದು ಅಂದದ್ದಕ್ಕೆ ಸಿದ್ಧನು ಒಪ್ಪಿಗೆ ಕೊಟ್ಟನು.


ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ


ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ  ಕಥೆಗಳ ಲಿಂಕಗಳು 
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
2)Facebook shareಗಾಗಿ👉
3)


«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ