🕉️ ಸಿದ್ಧಾರೂಢರು ಹಾಗೂ ನವಲಗುಂದ ನಾಗಲಿಂಗ ಸ್ವಾಮಿಗಳ ಸಂಗಮವಾದ ಕಥೆ, ಶ್ರೀ ಸಿದ್ಧಾರೂಢ ಮಠದಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಭಜನೆ, ಕೀರ್ತನೆ, ಶಾಸ್ತ್ರಶ್ರವಣ ಇತ್ಯಾದಿಗಳು ಹುಬ್ಬಳ್ಳಿಯ ಜನರ ಜೊತೆಗೆ ದೇಶದ ನಾನಾ ಮೂಲೆಗಳಿಂದ ಭಕ್ತರನ್ನು ಆಕರ್ಷಿಸತೊಡಗಿದವು. ಸಹಸ್ರಾರು, ಮುಂದೆ ಲಕ್ಷಾವಧಿ ಭಕ್ತ ಸಮುದಾಯ ಶ್ರೀಗಳ ಮಠಕ್ಕೆ ಬಂದು ಶ್ರೀಗಳ ದರ್ಶನ ಅನ್ನಪ್ರಸಾದ ಸ್ವೀಕರಿಸುವ, ಶಾಸ್ತ್ರ ಶ್ರವಣ ಮಾಡುವ ಹವ್ಯಾಸ ದಿನೇ ದಿನೇ ಬೆಳೆಯತೊಡಗಿತು. ಕೆಲ ಕಾಲ ಗತಿಸಿದ ನಂತರ ಗೌರಿ ಹುಣ್ಣಿಮೆಯು ಸಮೀಪಿಸಿತು. ಕಳೆದ ವರ್ಷಕ್ಕಿಂತಲೂ ಹೆಚ್ಚಿನ ವೈಭವದಿಂದ ರಥೋತ್ಸವ ಮಾಡಬೇಕೆಂದು ಪೂರ್ವ ಸಿದ್ಧತೆಗಳನ್ನು ಭಕ್ತರು ಮಾಡತೊಡಗಿದರು. ಸಪ್ತಾಹ ಇಡಬೇಕೆಂದೂ ಪ್ರತಿನಿತ್ಯ ಶಾಸ್ತ್ರ, ಶ್ರವಣ, ಕೀರ್ತನೆ, ಭಜನೆ, ಅನ್ನ ಸಂತರ್ಪಣೆ ಮಾಡಬೇಕೆಂದು ನಿರ್ಧರಿಸಲಾಯಿತು. ಸಣ್ಣದಾದ ತೆಪ್ಪದ ತೇರನ್ನು ಕಟ್ಟಿ ಶೃಂಗರಿಸಿದರು. ಭಕ್ತರು ಕಾರ್ಯಕ್ರಮಗಳ ಪತ್ರಿಕೆಗಳನ್ನು ವಿತರಣೆ ಮಾಡಿದರು. ಸಪ್ತಾಹದಲ್ಲಿ ಪಾಲ್ಗೊಳ್ಳಲು ಸಾಧು ಸಂತರು, ಕೀರ್ತನಕಾರರು, ಭಜನಾಮೇಳಗಳು ಶಾಸ್ತ್ರಿಗಳು ಹಾಗೂ ಮಹಾತ್ಮರು ಆಗಮಿಸಿದರು. ಸಪ್ತಾಹದ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಲು ತಂಡೋಪತಂಡವಾಗಿ ಕಾರ್ಯಕರ್ತರು ತಮ್ಮ ತಮಗೆ ನಿರ್ವಹಿಸಿಲಾದ ಕಾರ್ಯಗಳಲ್ಲಿ ತತ್ಪರರಾದರು. ಇಡೀ ನಗರವೇ ಹಬ್ಬದ ವಾತಾವರಣದಿಂದ ರಂಗು ರಂಗಾಯಿತು. ಎಲ್ಲಿ ನೋಡಿದಲ್ಲಿ ಓಂ ನಮಃ ಶಿವಾಯ ...